ಆರಂಭ ಸುದ್ದಿ ಕನ್ನಡ



















ಔರಾದ್ ಆರಂಭ ಸುದ್ದಿಕನ್ನಡ ಜುಲೈ 29 -2025
ಔರಾದ್ ಪಟ್ಟಣದ ಜುಲೈ 3೦ ಬುಧುವಾರ ಬೆಳೆಗ್ಗೆ 11 ಗಂಟೆಗೆ ಕರ್ನಾಟಕ ಮೀಡಿಯಾ ಜರ್ನಲಿಸ್ಟ ಯುನಿಯನ್ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಸಂತೋಷ ಚಾಂಡೇಶ್ವರೆ!!!.
ಔರಾದ್ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಜುಲೈ 3೦ ಬುಧುವಾರ ಬೆಳೆಗ್ಗೆ 11 ಗಂಟೆಗೆ ಕರ್ನಾಟಕ ಮೀಡಿಯಾ ಜರ್ನಲಿಸ್ಟ ಯುನಿಯನ್ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಸಂತೋಷ ಚಾಂಡೇಶ್ವರೆ ತಿಳಿಸಿದ್ದಾರೆ. 
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಪ್ರತಿ ವರ್ಷದಂತೆ ಈ ಬಾರಿಯು ಪತ್ರಿಕಾ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದು ಭಾಲ್ಕಿ ಹಿರೇಮಠ ಸಂಸ್ಥಾನದ ಪಿಠಾಧಿಪತಿ ಗುರುಬಸವ ಪಟ್ಟದ್ದೇವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಶಾಸಕ ಪ್ರಭು ಚವ್ಹಾಣ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಡಾ. ಶಿವಲಿಂಗ ಹೆಡೆ ಉಪನ್ಯಾಸ ನೀಡುವರು. ಪಪಂ ಅದ್ಯಕ್ಷೆ ಸರೂಬಾಯಿ ಘೂಳೆ,

ತಹಸೀಲ್ದಾರ ಮಹೇಶ ಪಾಟೀಲ್, ತಾಪಂ ಇಒ ಶಿವಕುಮಾರ ಘಾಟೆ, ಸಿಪಿಐ ರಘುವೀರಸಿಂಗ್ ಠಾಕೂರ್,ಅನೀಲಕುಮಾರ ದೇಶಮುಖ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಬಾಲಾಜಿ ಅಮರವಾಡಿ, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪತ್ರಕರ್ತ ಅಮರ ಮೋಕ್ತೆದಾರ ಪ್ರಾಸ್ತಾವಿಕ ನುಡಿ ಹಾಗೂ ನಿರುಪಣೆ ಮಾಡಲಿದ್ದಾರೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಜಬರು ಭಾಗವಹಿಸುವಂತೆ ಸಂಘದ ತಾಲೂಧ್ಯಕ್ಷರು ಸಂತೋಷ ಚಾಂಡೇಶ್ವರೆ ಮನವಿ ಮಾಡಿದ್ದಾರೆ..... wwwarambhsuddikannada.com


Author

Arambh Suddi Kannada News True Newses And Stories Telecasting

Experienced journalist focused on global news, trends, and untold stories — with a commitment to accuracy and impact.

0/Post a Comment/Comments