ಧಾರವಾಡ ಕರ್ನಾಟಕದ ಧಾರವಾಡ ಜಿಲ್ಲೆ ಯುವ ಪ್ರತಿಭೆ ಸಂಜಯಕುಮಾರ ಎಂಬ ಯುವಕನಿಗೆ ಪ್ರತಿಷ್ಠಿತ ಸಿವೈಸಿಎನ್ (CYCN)ಇಂಡಿಯಾ ಸಂಸ್ಥೆ ಯುವ ನಾಯಕನಾಗಿ ಆಯ್ಕೆ!!!!
Commonwealth Youth Climate Change Network (CYCN) India, it is Appoint of National Youth Lead – CYCN India,
ಬೆಂಗಳೂರು ಆರಂಭ ಸುದ್ದಿ ಕನ್ನಡ 06August 2025ಯುನಿಸೇಫ್ ನ ಯು -ರಿಪೋರ್ಟ್ ಇಂಡಿಯಾ ರಾಯಭಾರಿ, ವಾಟರ್ ಏಡ್ ಇಂಡಿಯಾ ಜಲ್ ಚಾಂಪಿಯನ್ ಹಾಗೂ ನೆಹರೂ ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಉನ್ನತ ಭಾರತ ಅಭಿಯಾನ ಸೇರಿ ಅನೇಕ ಸ್ವಯಂ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಯುವ ಸಬಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಯುವ ಸಂಘಟಕ, ಚಿಂತಕ ಹಾಗೂ ಪತ್ರಕರ್ತ ಸಂಜಯಕುಮಾರ ಬಿರಾದಾರ ಈಗ ಪ್ರತಿಷ್ಠಿತ ಕಾಮನ್ವೆಲ್ತ್ ಯೂಥ್ ಕ್ಲೈಮೇಟ್ ಚೇಂಜ್ ನೆಟವರ್ಕ್ ಇಂಡಿಯಾದ ಯೂಥ್ ಲೀಡರ್ಆಗಿ ನೇಮಕಗೊಂಡಿದ್ದಾರೆ. ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ಸುಚಿತ್ ಶಿಂಧೆ ನೇಮಕಾತಿ ಆದೇಶ ನೀಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ವಿಷಯವಾಗಿ ಯುವಕರಲ್ಲಿ ಜಾಗೃತಿ ಸೇರಿದಂತೆ ಅನೇಕ ಕಾರ್ಯ ಚಟುವಟಿಕೆಗಳನ್ನು ದೇಶದಾದ್ಯಂತ ಸಂಘಟಿಸುವಲ್ಲಿ ಮುಂಚೂಣಿ ಪಾತ್ರ ವಹಿಸುವಂತೆ ಸಂಜಯಕುಮಾರ ಅವರಿಗೆ ಕಾರ್ಯಾದೇಶ ನೀಡಲಾಗಿದೆ.
ಯುವಜನತೆ ಬದಲಾವಣೆ ಹರಿಕಾರರು. ಹವಮಾನ ಬದಲಾವಣೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಯುವ ಶಕ್ತಿಯೇ ಪರಿಹಾರ. ಹೀಗಾಗಿ ಯುವ ಸಂಪನ್ಮೂಲ ಯಾವ ರೀತಿ ಹವಾಮಾನ ಬದಲಾವಣೆಯ ಸವಾಲು ಎದುರಿಸಲಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹಿರಿಯರ ಮಾರ್ಗದರ್ಶನ, ಸಲಹೆಯಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಸಂಜಯ ಕುಮಾರ ಬಿರಾದಾರ ತಿಳಿಸಿದ್ದಾರೆ....www.arambhsuddikannada.com

Post a Comment